ಚಾಕು ತೋರಿಸಿದ್ದ ಪ್ರಕರಣ- ಕಂಡಕ್ಟರ್ ನೇಣಿಗೆ ಶರಣು…!

ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಗ್ರಾಮದ ಹೊರವಲಯದ ಮರವೊಂದರಲ್ಲಿ ನಿರ್ವಾಹಕರೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೌಲಾಸಾಬ ಮಿಶ್ರಿಕೋಟಿ ಎಂಬುವವರೇ ನೇಣಿಗೆ ಶರಣಾಗಿದ್ದು, ಗೊಬ್ಬರದ ಚೀಲವೊಂದರ ಮೇಲೆ ತನ್ನ ಸಾವಿಗೆ ನಿಖರವಾದ ಕಾರಣವೇನು ಎಂಬುದನ್ನ ಬರೆದಿಡಲಾಗಿದೆ. ಮಂಟೂರಿಗೆ ಕರೆದುಕೊಂಡು ಹೋಗಿರುವ ಬಗ್ಗೆಯೂ, ಚಾಕು ತೋರಿಸಿ ಬೆದರಿಸಿರುವ ಬಗ್ಗೆಯೂ ಚೀಲದ ಮೇಲೆ ನಮೂದು ಮಾಡಲಾಗಿದೆ.

ಮೌಲಾಸಾಬ ಮಿಶ್ರಿಕೋಟಿ ಸೇವೆಯಿಂದ ಅಮಾನತ್ತಾದ ಮೇಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದ. ಇದೇ ಕಾರಣದಿಂದ ಮಾನಸಿಕವಾಗಿ ನೊಂದು ಸಾವಿಗೆ ಶರಣಾಗಿದ್ದಾನೆಂದು ಹೇಳಲಾಗಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ತೆರಳಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ.