ರುಂಡ-ಮುಂಡದ ಎರಡು ಕೈ, ಒಂದು ಕಾಲು ಪತ್ತೆ- ಇನ್ನೊಂದು ಕಾಲು ನಾಪತ್ತೆ…!
1 min readಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿಯ ಸಂಸ್ಕಾರ ಶಾಲೆಯ ಸಮೀಪದಲ್ಲಿ ದೇಹ ಸಿಕ್ಕ ಬೆನ್ನಲ್ಲೇ, ದೇಹ ಸಿಕ್ಕ ಕೆಲವು ಮೀಟರ್ ಅಂತರದಲ್ಲಿ ದೇಹದ ಎರಡು ಕೈ ಹಾಗೂ ಒಂದು ಕಾಲು ದೊರಕಿದ್ದು, ಇನ್ನೊಂದು ಕಾಲಿಗಾಗಿ ಮತ್ತೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಇಂತಹದೊಂದು ಕ್ರೈಂ ಪ್ರಕರಣ ನಡೆದಿರಲೇ ಇಲ್ಲ. ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿ ದೇಹದ ರುಂಡ ಸಿಕ್ಕ ನಂತರದ ಬೆಳವಣಿಗೆಯಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೇಹ ಮತ್ತು ಕೈ-ಕಾಲುಗಳು ದೊರೆತಿವೆ.
ದೇಹವನ್ನ ಸುಡುವ ಪ್ರಯತ್ನವೂ ನಡೆದಿದ್ದು, ಇನ್ನೊಂದು ಕಾಲು ಎಲ್ಲಿ ಹೋಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಮೃತದೇಹವನ್ನ ಇಷ್ಟೊಂದು ಕ್ರೂರವಾಗಿ ಕತ್ತರಿಸಿ, ಬೇರೆ ಬೇರೆ ಜಾಗದಲ್ಲಿ ಹಾಕಿರುವ ಘಟನೆ ಪೊಲೀಸರನ್ನೂ ಜಿಜ್ಞಾಸೆಗೆ ನೂಕಿದೆ.
ಕಳೆದ 24 ಗಂಟೆಯಿಂದಲೂ ದೇಹದ ಭಾಗಗಳನ್ನ ಹುಡುಕುತ್ತಿರುವ ಪೊಲೀಸರು ಕೊಲೆಯಾಗಿರುವ ವ್ಯಕ್ತಿ ಯಾರೂ ಎಂಬುದನ್ನ ಪತ್ತೆ ಹಚ್ಚಬೇಕಿದೆ. ಜಿಲ್ಲಾ ಮತ್ತು ಕಮೀಷನರೇಟ್ ಪೊಲೀಸರಿಗೆ ಹೊಸದೊಂದು ಟಾಸ್ಕ್ ಇದಾಗಿದ್ದು, ಪ್ರಕರಣ ಜಟಿಲವಾಗಿದೆ.