ಠಾಣೆ ಜವಾಬ್ದಾರಿ ಹೊತ್ತ ಕೆಲವೇ ಗಂಟೆಗಳಲ್ಲಿ ಮಹತ್ವದ ಪ್ರಕರಣ ಬೇಧಿಸಿದ ಇನ್ಸಪೆಕ್ಟರ್ ಅಗಸಿಮನಿ…!
1 min readಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಮಹಿಳೆಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ, ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಧಾರವಾಡ ಮಹಿಳಾ ಪೊಲೀಸ್ ಠಾಣೆ ಇನ್ಸಪೆಕ್ಟರ್ ವೈ.ಡಿ.ಅಗಸಿಮನಿ ಯಶಸ್ವಿಯಾಗಿದ್ದಾರೆ.
ಅಮ್ಮಿನಬಾವಿ ಗ್ರಾಮದ ಪ್ರೀತಿ ಎಂಬ ಮಹಿಳೆಗೆ ಕೆಲಸ ಕೊಡುವುದಾಗಿ ಫುಸಲಾಯಿಸಿ ಗುಜರಾತಿನ ಅಹಮದಾಬಾದ್ ಗೆ ಕರೆದುಕೊಂಡು ಹೋಗಿದ್ದ ದಿಲೀಪ ಜೈನ್ ಎಂಬಾತ, ಅಲ್ಲಿಗೆ ಹೋದ ನಂತರ ಮಹಿಳೆಯನ್ನ 2ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದಾನೆ.
ಈ ಬಗ್ಗೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆಗೆ ನ್ಯಾಯ ದೊರಕಿದೆ. ಪ್ರಕರಣ ದಾಖಲು ಮಾಡಿಕೊಂಡು, ತಕ್ಷಣವೇ ಗುಜರಾತಿಗೆ ಹೋಗಿ ಆರೋಪಿ ದಿಲೀಪ್ ಜೈನನನ್ನ ಬಂಧನ ಮಾಡುವಲ್ಲಿ ಇನ್ಸಪೆಕ್ಟರ್ ವೈ.ಡಿ.ಅಗಸಿಮನಿ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತೀವ್ರ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಹಿರಿಯ ಅಧಿಕಾರಿಗಳು ಶ್ಲಾಘನೆ ಮಾಡುವಂತಾಗಿದೆ.