ಧಾರವಾಡ ಶಿಕ್ಷಣ ಇಲಾಖೆಗೆ ಏನಾಗಿದೆ…! ಸರಕಾರದ ರೂಲ್ಸ್ ಬ್ರೇಕ್ ಮಾಡುವುದೇ ಇವರ ಕಾಯಕ…!

ಧಾರವಾಡ: ದಿನಕ್ಕೆ ಸಾವಿರಾರೂ ಜನರಿಗೆ ಬುದ್ಧಿ ಹೇಳುವ ಜನರೇ ಪ್ರತಿದಿನವೂ ತಪ್ಪು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದು, ಸರಕಾರದ ನಿಯಮಗಳನ್ನ ಗಾಳಿಗೆ ತೂರುವುದೇ ತಮ್ಮ ನಿಯತ್ತು ಎನ್ನುವಂತಾಗಿದೆ ಎನ್ನುವಂತಾಗಿದ್ದು, ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ..

ಕೊರೋನಾ ಎರಡನೇಯ ಅಲೆ ಆರಂಭವಾಗಿದೆ ಮತ್ತೂ ಸಾಕಷ್ಟು ಜಾಗೃತರಾಗಬೇಕು ಎಂದು ಸರಕಾರ ಪದೇ ಪದೇ ಹೇಳುತ್ತಿದೆ. ಆದರೆ, ಶಿಕ್ಷಣ ಇಲಾಖೆ ಕಾನೂನು ಪಾಲನೆಯ ಬಗ್ಗೆ ಎಷ್ಟೊಂದು ನಿಷ್ಕಾಳಜಿ ವಹಿಸುತ್ತಿದೆ ಎಂಬುದಕ್ಕೆ ಒಂದೇ ವಾರದಲ್ಲಿ ಎರಡನೇಯ ಕಾರ್ಯಕ್ರಮ ಇಂದು ನಡೆಯುತ್ತಿದೆ.

ಧಾರವಾಡದ ಸರಕಾರಿ ನೌಕರರ ಭವನದಲ್ಲಿ ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದಶಮಾನೋತ್ಸವ ಅಂಗವಾಗಿ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ, ಸ್ವಾಗತ, ಬೀಳ್ಕೋಡುಗೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರವಾನಿಗೆ ನೀಡಿದ್ದಾರೆ.
ಬೇಲಿನೇ ಎದ್ದು ಹೊಲ ಮೇಯುವ ಕೆಲಸವನ್ನ ಮಾಡುತ್ತಿದ್ದು, ಇವರಿಗೆ ಪಾಠ ಮಾಡಿ, ಇದು ಕೊರೋನಾ ಕಾಲಾ ಸರ್ ಎಂದು ಹೇಳುವವರು ಯಾರು. ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರೇ, ನೀವಾದ್ರೂ…!?