Posts Slider

Karnataka Voice

Latest Kannada News

ಹುಬ್ಬಳ್ಳಿ ಸಂತೋಷನಗರದಲ್ಲಿಯೂ ಹೊಡೆದಾಟ…!

Spread the love

ಹುಬ್ಬಳ್ಳಿ: ರಂಗಪಂಚಮಿಯಲ್ಲಿ ಗೊಂದಲಗಳು ನಡೆಯಬಾರದೆಂದು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರೂ ಕೂಡಾ, ತಮ್ಮ ಪುಂಡಾಟವನ್ನ ಬಿಟ್ಟಿಲ್ಲ. ಇದಕ್ಕೆ ಸಾಕ್ಷಿಯಂಬಂತೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೋಷನಗರದಲ್ಲೂ ಯುವಕರಿಬ್ಬರಿಗೆ ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ.

ರಂಗಪಂಚಮಿಯನ್ನ ಆಚರಣೆಯ ಮಾಡುವ ನೆಪದಲ್ಲಿ ಬಂದು ಯುವಕರ ಗುಂಪೊಂದು ತಮ್ಮ ಏರಿಯಾಗೆ ಯಾಕೆ ಬಂದೀರಿ ಎಂದು ಶಾನು ಹಾಗೂ ಈಶ್ವರ ಎಂಬುವವನ್ನ ಥಳಿಸಲಾಗಿದೆ. ಇಬ್ಬರು ಯುವಕರನ್ನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಲಾಗಿದೆ.

ಬಣ್ಣದಾಟವಾಡುತ್ತ ಬಂದ ಇಬ್ಬರನ್ನ ತಡೆದ ಕೆಲವು ಪೋಕರಿಗಳು, ತಮ್ಮ ಏರಿಯಾಗೆ ಬಂದ ಕಾರಣ ಕೇಳಿ ಹೊಡೆದಾಟ ನಡೆಸಿದ್ದಾರೆ. ಇದರಿಂದ ಗೊಂದಲ ಸೃಷ್ಠಿಯಾಗಿದ್ದು, ಇಬ್ಬರು ಯುವಕರಿಗೆ ತೀವ್ರ ಥರದ ಗಾಯಗಳಾಗಿವೆ.

ನಗರದಲ್ಲಿ ಪೊಲೀಸರು ಸಾರ್ವಜನಿಕರ ಒಳತಿಗಾಗಿ ಬಿಗಿ ಕಾವಲನ್ನ ಹಾಕಿದರೂ, ಪುಂಡರು ಇಂತಹ ಘಟನೆಗಳನ್ನ ಮಾಡಿದ್ದು ಸೋಜಿಗವೇ ಸರಿ. ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *