ಧಾರವಾಡದ ಸೈದಾಪುರ, ಮರಾಠಾ ಕಾಲನಿ, ಎಂಬಿನಗರದಲ್ಲಿ ಹೆಸ್ಕಾಂಗೆ ಕವಿದಿದೆ ಕತ್ತಲು….!
1 min readಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜವಾಬ್ದಾರಿಯು ಈ ವಿಷಯವಾಗಿ ಇದೆ ಎನ್ನುವುದನ್ನ ಮರೆತಂತೆ ನಟಿಸುತ್ತಿರುವುದು ಕೂಡಾ ಕಂಡು ಬರುತ್ತಿದೆ..
ಧಾರವಾಡ: ಸರಕಾರಿ ಅಧೀನದಲ್ಲಿರುವ ಸಂಸ್ಥೆಗಳು ಎಷ್ಟೊಂದು ಕರಾರುವಕ್ಕಾಗಿ ತಪ್ಪುಗಳನ್ನ ಮಾಡುತ್ತ ನಡೆಯುತ್ತಿವೆ ಎನ್ನುವುದಕ್ಕೆ ಇದೊಂದು ಸಾಕ್ಷಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ.. ನೋಡಿ.
ಧಾರವಾಡದ ಎಂಬಿನಗರ, ಮರಾಠಾ ಕಾಲನಿ ಹಾಗೂ ಸೈಧಾಪುರ ಪ್ರದೇಶದಲ್ಲಿ ಗಂಟೆ ಮೂರಾಗುತ್ತ ಬಂದರೂ, ಇನ್ನೂ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ತೆಗೆದಿಲ್ಲ. ಇದರ ಬಿಲ್ ನ್ನ ಯಾರೂ ಕೊಡುತ್ತಾರೆಂಬ ಕಲ್ಪನೆ, ಸರಕಾರದ ಸಂಬಳ ಪಡೆಯುವ ಅಧಿಕಾರಿಗಳಿಗೆ ಗೊತ್ತಿದ್ದರೂ, ಕೂಡಾ ಹೀಗೆ ವರ್ತಿಸುತ್ತಿರುವುದು ಜನಸಾಮಾನ್ಯರಲ್ಲಿ ಆಕ್ರೋಶ ಮೂಡಿಸುತ್ತಿದೆ.
ಹೈಮಾಸ್ಕನಿಂದ ಪ್ರತಿದಿನ ಸಾಕಷ್ಟು ಕರೆಂಟ್ ವ್ಯಯವಾಗುತ್ತದೆ. ಬೆಳಿಗ್ಗೆ ಆರು ಗಂಟೆಗೆ ಇಲ್ಲಿನ ವಿದ್ಯುತ್ ತೆಗೆಯಬೇಕಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗಲೂ ಉರಿಯುತ್ತಿದೆ.
ವಿದ್ಯುತ್ ಇಲಾಖೆಯವರು ಇದನ್ನೇಲ್ಲ ಗಮನಿಸಬೇಕಿದೆ. ಸಂಬಳ ಸರಕಾರದ್ದೇ ಆದರೂ, ಸರಕಾರ ಜನರದ್ದೆಂಬ ಕಲ್ಪನೆಯನ್ನ ಸ್ಮರಿಸಿಕೊಳ್ಳುವ ಅವಶ್ಯಕತೆಯಿದೆಯಲ್ಲವೇ…!