Posts Slider

Karnataka Voice

Latest Kannada News

Spread the love

ಧಾರವಾಡ: ತನ್ನ ಚಾಲಕ ವೃತ್ತಿಗಾಗಿ ಧಾರವಾಡಕ್ಕೆ ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವರಿಗೆ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಬೈಕ್ ಸವಾರನ ಕಾಲು ಮುರಿದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೊಲ್ತಿಕೋಟಿ ಗ್ರಾಮದ ಖಮರುದ್ಧೀನ ಲಾಲಮೀಯಾ ಎಂಬ ವ್ಯಕ್ತಿಯದ್ದೇ ಕಾಲು ಮುರಿದಿದ್ದು, ಧಾರವಾಡದ ಸಮೀಪದಲ್ಲಿರುವ ರಮ್ಯ ರೆಸಿಡೆನ್ಸಿ ಬಳಿ ಬಂದಾಗ, ವೇಗವಾಗಿ ಬಂದ ಲಾರಿ ಚಾಲಕ ಡಿಕ್ಕಿ ಹೊಡೆದಿದ್ದಾನೆ.

ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಆಗಮಿಸಿದ ಬೈಪಾಸ್ ಅಂಬ್ಯುಲೆನ್ಸ್ ಗಾಯಾಳುವನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದ ಹಾಗೇ ಸ್ಥಳಕ್ಕೆ ಧಾವಿಸಿರುವ ಧಾರವಾಡ ಸಂಚಾರಿ  ಠಾಣೆಯ ಪೊಲೀಸರು, ಪರಿಶೀಲನೆಯನ್ನ ನಡೆಸಿದ್ದು, ರಸ್ತೆಯಲ್ಲಿದ್ದ ಲಾರಿ ಮತ್ತು ಬೈಕ್ ನ್ನ ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *