Posts Slider

Karnataka Voice

Latest Kannada News

ಇನ್ಸಪೆಕ್ಟರ್ ವಿಜಯ ಬಿರಾದಾರ, ಅಲ್ತಾಪ ಮುಲ್ಲಾ ವರ್ಗಾವಣೆ…!

1 min read
Spread the love

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುವ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 34 ಇನ್ಸಪೆಕ್ಟರುಗಳನ್ನ ವರ್ಗಾವಣೆ ಮಾಡಿ, ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಧಾರವಾಡದ ಸಿಸಿಬಿಯಲ್ಲಿದ್ದ ಇನ್ಸಪೆಕ್ಟರ್ ಅಲ್ತಾಪ ಮುಲ್ಲಾ ಅವರನ್ನ ಬೆಳಗಾವಿ ಶಹರ ಎಸ್ ಬಿ ಬ್ರ್ಯಾಂಚಿಗೆ ವರ್ಗಾವಣೆ ಮಾಡಿದ್ದಾರೆ. ಧಾರವಾಡ ಸಿಇಎನ್ ಠಾಣೆಯಲ್ಲಿದ್ದ ಇನ್ಸಪೆಕ್ಟರ್ ವಿಜಯ ಬಿರಾದಾರರನ್ನ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

ಬೆಳಗಾವಿ ಶಹರದ ಸಿಸಿಆರ್ ಬಿಯಲ್ಲಿದ್ದ ಇನ್ಸಪೆಕ್ಟರ್ ಶ್ರೀನಿವಾಸ ಹಂಡಾ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆಗೊಂಡಿದ್ದಾರೆ. ಬೆಳಗಾವಿಯ ಸಿಇಎನ್ ಠಾಣೆಯಲ್ಲಿದ್ದ ಬಿ.ಆರ್.ಗಡ್ಡೇಕರ ಅವರನ್ನ ಧಾರವಾಡದ ಸಿಇಎನ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

ಬೆಳಗಾವಿಯ ಶಹರ ಎಸ್ ಬಿ ಬ್ರ್ಯಾಂಚಿನ ಯಲ್ಲನಗೌಡ ನವಲಗಟ್ಟಿಯವರನ್ನ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಉಪಚುನಾವಣೆ ಮುಗಿದ ನಂತರ ಮತ್ತೆ ಮೊದಲಿನ ಠಾಣೆಗೆ ವರ್ಗಾವಣೆಯನ್ನ ಸರಕಾರ ಮಾಡಲಿದೆ ಎಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *

You may have missed