Posts Slider

Karnataka Voice

Latest Kannada News

ಜನತಾ ಬಜಾರ್-ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ…!

Spread the love

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣ ಮತ್ತು ಜನತಾ ಬಜಾರಿಗೆ ವಿವಿಧ ಸ್ಥಳಗಳಿಂದ ಬರುವ ಜನರ ಮೊಬೈಲ್ ಎಗಿರಿಸುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಉಪನಗರ ಪೋಲಿಸ್ ಠಾಣೆಯ ಇನ್ಸಪೆಕ್ಟರ್  ರವಿಚಂದ್ರನ್ ಬಡಫಕ್ಕೀರಪ್ಪನವರ ನೇತೃತ್ವದಲ್ಲಿ ಪಿಎಸ್ಐ ಸೀತಾರಾಮ ಲಮಾಣಿ, ಆರ್.ಎಂ.ಕಾಲವಾಡ ಹಾಗೂ ಸಿಬ್ಬಂದಿಗಳಾದ ಕೆ.ಎನ್.ನೆಲಗುಡ್ಡ, ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹದ್ದೇರಿ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಮಾಲತೇಶ ಮರಿನಾಯ್ಕರ ಹಾಗೂ ಕುಮಾರ ಬಾಗವಾಡ, ಮಂಜು ಕಮತದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬಂಧಿತ ಆರೋಪಿಗಳನ್ನು ಹುಬ್ಬಳ್ಳಿ ವೀರಾಪುರ ಓಣಿಯ ಸುರೇಶ ಭಜಂತ್ರಿ, ಹಾಗೂ ಗಬ್ಬೂರ ಬಸವೇಶ್ವರ ನಗರದ ಬಸವರಾಜ ಹೆಬ್ಬಳ್ಳಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳ್ಳತನ ಮಾಡಿದ ವಿವಿಧ ಕಂಪನಿಯ ಸುಮಾರು 11 ಮೊಬೈಲ್ ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಬೈಕನ್ನ ವಶಕ್ಕೆ ಪಡೆಯಲಾಗಿದೆ.

ಸುಮಾರು ಒಂದು ಲಕ್ಷ ಏಳು ಸಾವಿರದಾ 500 ರೂಪಾಯಿ ಮೌಲ್ಯದ ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದ್ದು, ಬೈಕಿನ ಮೌಲ್ಯ 50 ಸಾವಿರವೆಂದು ಅಂದಾಜಿಸಲಾಗಿದೆ.

ಹುಬ್ಬಳ್ಳಿಯ ಉಪನಗರ ಪೋಲಿಸ್ ಠಾಣೆಯ ಇನ್ಸಪೆಕ್ಟರ್  ರವಿಚಂದ್ರನ್ ಬಡಫಕ್ಕೀರಪ್ಪನವರ ನೇತೃತ್ವದಲ್ಲಿ ಪಿಎಸ್ಐ ಸೀತಾರಾಮ ಲಮಾಣಿ, ಆರ್.ಎಂ.ಕಾಲವಾಡ ಹಾಗೂ ಸಿಬ್ಬಂದಿಗಳಾದ ಕೆ.ಎನ್.ನೆಲಗುಡ್ಡ, ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹದ್ದೇರಿ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಮಾಲತೇಶ ಮರಿನಾಯ್ಕರ ಹಾಗೂ ಕುಮಾರ ಬಾಗವಾಡ, ಮಂಜು ಕಮತದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *