Posts Slider

Karnataka Voice

Latest Kannada News

ನುಗ್ಗಿಕೇರಿಯ ಅಂಗಡಿ ಮುಂದೆ ನೇತಾಡುತ್ತಿದೆ ಶವ…!

1 min read
Spread the love

ಧಾರವಾಡ: ತಾನು ದಿನನಿತ್ಯ ಹೋಗುತ್ತಿದ್ದ ಅಂಗಡಿ ಮುಂದೆ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ಸಂಭವಿಸಿದೆ.

ಸುರೇಶ ಯಲ್ಲಪ್ಪ ವಗ್ಗರ ಎಂಬ 25 ವರ್ಷದ ಯುವಕನೇ ಕುಡಿದ ಅಮಲಿನಲ್ಲಿ ನೇಣಿಗೆ ಶರಣಾಗಿದ್ದೇನೆಂದು ಹೇಳಲಾಗಿದ್ದು, ಬೆಳ್ಳಂಬೆಳಿಗ್ಗೆ ಅಂಗಡಿಗಂಟಿಕೊಂಡಿದ್ದ ಮನೆಯವರು ಬಾಗಿಲು ತೆಗೆದಾಗ ಮೃತ ದೇಹ ನೇತಾಡುತ್ತಿರುವುದು ಗೊತ್ತಾಗಿದೆ.

ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ಮನೆ ಬಿಟ್ಟು ಹೋಗಿದ್ದ ಸುರೇಶ, ಹೊರಗಡೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.

ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಶವವನ್ನ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದ ಹಾಗೇ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.


Spread the love

Leave a Reply

Your email address will not be published. Required fields are marked *

You may have missed