ಸತಿ ಕೊಂದವನು ಉಣಕಲ್ ಕೆರೆ ಖೋಡಿ ಬಳಿ ಪತ್ತೆ…!

ಹುಬ್ಬಳ್ಳಿ: ತನ್ನ ಸತಿಯನ್ನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಮಹಾಶಯ, ಉಣಕಲ್ ಕೆರೆಯ ಖೋಡಿಯ ಬಳಿ ತಪ್ಪಿಸಿಕೊಂಡಿದ್ದಾಗ ವಿದ್ಯಾನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ತನ್ನ ಸತಿಯಾದ ರೇಣುಕಾಳನ್ನ ವೇಲ್ ದಿಂದ ಬಿಗಿದು ಕೊಲೆ ಮಾಡಿದ್ದ ಮಹಾದೇವಪ್ಪ ಫಕ್ಕೀರಪ್ಪ ಪೂಜಾರ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಣ್ಮರೆಯಾಗಿದ್ದ. ಕೊಲೆ ಪ್ರಕರಣದ ಬೆಳಕಿಗೆ ಬಂದ ನಂತರ ಪೊಲೀಸರು ತನಿಖೆ ನಡೆಸಿದಾಗ ಪತಿ ಸಿಕ್ಕು ಬಿದ್ದಿದ್ದಾನೆ.
ಹುಬ್ಬಳ್ಳಿ ಹನಮಂತನಗರದ ಸಿದ್ಧೇಶ್ವರ ಕಾಲನಿಯಲ್ಲಿ ಜಗಳ ತೆಗೆದು ಕತ್ತು ಹಿಸುಕುವ ಜೊತೆಗೆ ವೇಲ್ ನಿಂದ ಕೂಡಾ ಬಿಗಿದು ಕೊಲೆ ಮಾಡಿದ್ದ ಮಹದೇವಪ್ಪ, ವೃತ್ತಿಯಲ್ಲಿ ಚಾಲಕನಾಗಿದ್ದಾನೆ.
ವಿದ್ಯಾನಗರ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಹೊಳಿ ನೇತೃತ್ವದಲ್ಲಿ ಆರೋಪಿಯನ್ನ ಪತ್ತೆ ಹಚ್ಚಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.