ಶಾಲಾ ಅವಧಿಯಲ್ಲಿ ಸಂಘದ ಕಾರ್ಯಚಟುವಟಿಕೆ ನಡೆಸುವಂತಿಲ್ಲ….!
1 min readಹುಬ್ಬಳ್ಳಿ: ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ಬುಕುಮಾರ ಅವರು ಕೆಲವು ಸಂಘದವರು ಸರಿಯಾಗಿ ಶಾಲೆಗಳಿಗೆ ಹಾಜರಾಗುವುದಿಲ್ಲವೆಂಬ ಪ್ರಶ್ನೆ ಎತ್ತಿದ ಬೆನ್ನಲ್ಲೇ, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಮಹತ್ವದ ಸುತ್ತೋಲೆಯನ್ನ ಹೊರಡಿಸಿದ್ದು, ತಮ್ಮ ಸಂಘದ ಪದಾಧಿಕಾರಿಗಳಿಗೆ ಖಡಕ್ ಸೂಚನೆಯನ್ನ ನೀಡಿದೆ.
ಈ ಸುತ್ತೋಲೆಯಲ್ಲಿರುವುದು…
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ (ರಿ) ಹುಬ್ಬಳ್ಳಿ
ಸುತ್ತೋಲೆ
ವಿಷಯ: ಸಂಘದ ಕಾರ್ಯಕಲಾಪಗಳು ಶಾಲಾ ಅವಧಿ ಹೊರತುಪಡಿಸಿ ನಡೆಯಲಿ ಗ್ರಾಮೀಣ ಶಿಕ್ಷಕರ ಸಂಘದ ಮನವಿ
ಮಾನ್ಯರೆ
ನಮ್ಮ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕದ ತಾಲೂಕು/ಜಿಲ್ಲಾ/ರಾಜ್ಯ ಮಟ್ಟದ ಎಲ್ಲ ಪದಾಧಿಕಾರಿಗಳಿಗೆ ಈ ಮೂಲಕ *ತಿಳಿಯಪಡಿಸುವುದೇನೆಂದರೆ
ನಮ್ಮ ಸಂಘದ ಯಾವುದೇ ಹಂತದ ಪದಾಧಿಕಾರಿಗಳು ಶಾಲಾ ಅವಧಿಯ ನಂತರ ಸಂಘಟನೆಯ ಚಟುವಟಿಕೆಗಳನ್ನು ಮಾಡಲು ತಿಳಿಸಿದೆ. ಸಂಘದ ವತಿಯಿಂದ ಕಾರ್ಯಕ್ರಮಗಳನ್ನು ಮಾಡುವುದಾದರೆ ರವಿವಾರ..ಶನಿವಾರ ಅಥವಾ ಸಾರ್ವತ್ರಿಕ ರಜಾ ದಿನಗಳಂದು ಇಲ್ಲವೆ ಶಾಲಾ ಅವಧಿ ಹೊರತುಪಡಿಸಿ ಸಭೆ ಸಮಾರಂಭ ಮಾಡಲು ಸೂಚಿಸಿದೆ ಯಾವುದೇ ಕಾರಣಕ್ಕೂ ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ವಿನಂತಿಸಿದೆ.
ಅಶೋಕ ಎಮ್.ಸಜ್ಜನ ರಾಜ್ಯಾಧ್ಯಕ್ಷರು ಹಾಗೂ ಮಲ್ಲಿಕಾರ್ಜುನ.ಸಿ.ಉಪ್ಪಿನ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ (ರಿ) ಹುಬ್ಬಳ್ಳಿ