Posts Slider

Karnataka Voice

Latest Kannada News

ನವಲೂರು ಬಳಿ ರೇಲ್ವೆ ಹಳಿಯಲ್ಲಿ “ಆ”ವ್ಯಕ್ತಿಯ ಶವ…!

Spread the love

ಧಾರವಾಡ: ತಾಲೂಕಿನ ನವಲೂರು ರೇಲ್ವೆ ನಿಲ್ದಾಣದ ಸಮೀಪದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಚಲಿಸುವ ರೈಲು ಗಾಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸುಮಾರು 60ರಿಂದ 65 ವಯಸ್ಸಿನ ಗ್ರಾಮೀಣ ಪ್ರದೇಶದ ರೈತರಂತೆ ಕಾಣುವ ವ್ಯಕ್ತಿಯು ಸಾವಿಗೀಡಾಗಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿಲ್ಲ.

ನವಲೂರು-ಧಾರವಾಡ ಮಧ್ಯದ 478/100-200  ಹತ್ತಿರವೇ ಶವ ಸಿಕ್ಕಿದೆ. ಮುಖಕ್ಕೆ ಗಂಭೀರವಾಗಿ ಪೆಟ್ಟಾಗಿ, ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ರೇಲ್ವೆ ಪೊಲೀಸರು ಶವವನ್ನ ಆಸ್ಪತ್ರೆಗೆ ರವಾನೆ ಮಾಡಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *