Posts Slider

Karnataka Voice

Latest Kannada News

EOರನ್ನೇ ಎಸಿಬಿ ಟ್ರ್ಯಾಪ್ ಮಾಡಿಸಿದ PDO

Spread the love

ತುಮಕೂರು: ಜಿಲ್ಲೆಯ ಚಳ್ಳಕೇರಿ ತಾಲೂಕಿನ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯನ್ನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೇ ಎಸಿಬಿ ಟ್ರ್ಯಾಪ್ ಮಾಡಿಸಿದ ಘಟನೆ ನಡೆದಿದ್ದು, ಲಂಚದ ಹಣದ ಸಮೇತ ತಾಲೂಕು ಪಂಚಾಯತಿ ಇಓ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಬಾರಕೇರ ಕಳೆದ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇವರ ಲಂಚಬಾಕತನದಿಂದ ಪಿಡಿಓಗಳು ಮಾನಸಿಕವಾಗಿ ಬೇಸತ್ತಿದ್ದರು.

ಇದೇ ಕಾರಣದಿಂದಲೇ ಬೆಳಗೆರೆ ಗ್ರಾಮ ಪಂಚಾಯತಿ ಪಿಡಿಓ ಗುಂಡಪ್ಪಗೆ 20 ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ಇಓರನ್ನ ಭ್ರಷ್ಟಾಚಾರ ನಿಗ್ರಹದ ದಳದಿಂದ ಟ್ರ್ಯಾಪ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಪ್ರತಿ ಪಂಚಾಯತಿಯಿಂದಲೂ ಹಣ ಬರಬೇಕೆಂದು ಬೇಡಿಕೆಯನ್ನ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಶ್ರೀಧರ ಮಾಡುತ್ತಿದ್ದರೆಂದು ಹೇಳಲಾಗಿದೆ. ಹೆಚ್ಚುವರಿ ಕ್ರಿಯಾ ಯೋಜನೆಗೆ ಮಂಜೂರಿ ನೀಡಲು ಹಣ ಕೇಳಿದಾಗ, ಜೈಲು ಪಾಲಾಗುವಂತೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *