ಸಾಲ ವಸೂಲಿಗೆ ಮಗುವನ್ನೇ ಮಾರಿಸಿದ್ದ ಧಾರವಾಡದ ದುರುಳರು…!
1 min readಧಾರವಾಡ: ಐದು ತಿಂಗಳ ಮಗುವನ್ನ ತಾವೂ ಕೊಟ್ಟ ಬಡ್ಡಿ ಹಣ ತೀರಿಸಲು ಆಗುವುದಿಲ್ಲವೆಂದು, ದಂಪತಿಗಳ ಗಂಡು ಮಗುವನ್ನ 2ವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ಭಾರತಿ ಮಂಜುನಾಥ ವಾಲ್ಮೀಕಿ, ರಮೇಶ ಮಂಜುನಾಥ ವಾಲ್ಮೀಕಿ, ರವಿ ಭೀಮಸೇನ ಹೆಗಡೆ ಹಾಗೂ ವಿನಾಯಕ ಅರ್ಜುನ ಮಾದರ ಎಂಬುವವರು, ಧಾರವಾಡದ ದಂಪತಿಗಳಿಗೆ ಬಡ್ಡಿ ಸಾಲವನ್ನ ನೀಡಿದ್ದರು. ಆ ಸಾಲವನ್ನ ಮರಳಿ ನೀಡುವಂತೆ ಪೀಡಿಸುತ್ತಿದ್ದರು.
ಕೊಟ್ಟ ಹಣವನ್ನ ಮರಳಿ ಕೊಡಲಾಗದ ದಂಪತಿಗಳ ಗಂಡು ಮಗುವನ್ನ ಉಡುಪಿಯ ವಿಜಯ ಬಸಪ್ಪ ನೆಗಳೂರು ಹಾಗೂ ಚಿತ್ರ ವಿಜಯ ನೆಗಳೂರ ಎಂಬುವವರಿಗೆ 2ವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಿಸಲಾಗಿತ್ತು. ಮಗು ಮಾರಾಟದ ಹಣವನ್ನ ಆರೋಪಿಗಳು ಪಡೆದುಕೊಂಡಿದ್ದರು.
ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ, ಪಿಎಸ್ಐ ಎಸ್.ಆರ್.ತೇಗೂರ ಸೇರಿದಂತೆ ಸಿಬ್ಬಂದಿಗಳು ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ. ಮಾರಾಟವಾಗಿದ್ದ ಮಗುವನ್ನ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.