ಮೇಜರ್ ಸಿದ್ಧಲಿಂಗಯ್ಯ “ಚಡ್ಡಿ” ವಿವಾದ: ವರ್ಧನ ವಿರುದ್ಧ ಮೇಜರ್ ದೂರು…!

ಧಾರವಾಡ: ಶಿಕ್ಷಣ ಇಲಾಖೆಯ ಕಲಬುರಗಿ ಆಯುಕ್ತಾಲಯದ ನಿರ್ದೇಶಕ ಡಾ.ಬಿಕೆಎಸ್ ವರ್ಧನರ ವಿರುದ್ಧ, ಸಾರ್ವಜನಿಕ ಶಿಕ್ಷಣ ಇಲಾಖೆ ಆಪರ್ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.

ಈ ದೂರು ಸಲ್ಲಿಸಲು ಕಾರಣವಾಗಿದ್ದು ಮೇಜರ್ ಸಿದ್ಧಲಿಂಗಯ್ಯ ಅವರು ಶಿಕ್ಷಣ ಸಚಿವ ಸುರೇಶಕುಮಾರ ಧಾರವಾಡಕ್ಕೆ ಬಂದಾಗ ನಡೆದ ಘಟನೆ. ಮಾರ್ಚ 2ರಂದು ಚಿತ್ರಕಲಾ ಕಲಾವಿದರು ಸನ್ಮಾನ ಮಾಡುವ ಸಮಯದಲ್ಲಿ ಮೇಜರ್ ಸಿದ್ಧಲಿಂಗಯ್ಯನವರು ಚಡ್ಡಿ ಹಾಕಿಕೊಂಡಿದ್ದರು. ಅದೇ ವಿಷಯಕ್ಕೆ ಸಂಬಂಧಿಸಿದ ಹಾಗೇ ಬಿಕೆಎಸ್ ವರ್ಧನ ಅವರು, ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನ ಹೀಯಾಳಿಸುತ್ತಿದ್ದಾರೆಂದು ಮೇಜರ್ ಸಿದ್ಧಲಿಂಗಯ್ಯ ದೂರು ನೀಡಿದ್ದಾರೆ.

ದೂರಿನ ಸಂಪೂರ್ಣ ಪ್ರತಿಯು ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿದೆ. ಅದರಲ್ಲಿ ಮೇಜರ್ ಸಿದ್ಧಲಿಂಗಯ್ಯ ಸಾಮಾಜಿಕ ಜಾಲತಾಣದಲ್ಲಿ ಕಚೇರಿಯ ಮುಖ್ಯಸ್ಥನಾದ ತಮ್ಮ ಮೇಲೆ ಅನಾವಶ್ಯಕವಾಗಿ ಆಪಾದನೆ ಮಾಡಿ ಅಸಂವಿಧಾನಕ ಶಬ್ಧ ಬಳಸುತ್ತಿದ್ದಾರೆಂದು ದೂರಿದ್ದಾರೆ.
ಮೇಜರ್ ಸಿದ್ಧಲಿಂಗಯ್ಯ ಅವರು ಮಾರ್ಚ ನಾಲ್ಕರಂದು ಸರಕಾರಕ್ಕೆ ದೂರು ನೀಡಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹಿರಿಯ ಅಧಿಕಾರಿಗಳ ಮುಸುಕಿನ ಗುದ್ದಾಟ ಎಲ್ಲಿಗೆ ಮುಂದುವರೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ.