ಎಸಿಬಿ ಬಲೆಗೆ ಬಿಇಓ…!

ಕೊಪ್ಪಳ: ಶಿಕ್ಷಣ ಇಲಾಖೆಯ ಭ್ರಷ್ಟಾಚಾರವೊಂದು ಹೊರಬಿದ್ದಿದೆ. ಬಂದ್ ಆಗಿದ್ದ ಶಾಲೆಯ ಡಿಪಾಜಿಟ್ ಹಣವನ್ನ ಮರಳಿ ಪಡೆಯಲು ಹಣದ ಬೇಡಿಕೆಯಿಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಎಫ್ ಡಿಎ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ಹಾಗೂ ಎಫ್ ಡಿಎ ಅರುಂಧತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊಪ್ಪಳ ಪಟ್ಟಣದ ಭಾಗ್ಯನಗರದ ಎಸ್ಎಸ್ ಕೆ ಶಾಲೆಯ ಬಾಲಚಂದ್ರ ಕಬಾಡೆ ಎನ್ನುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಎಸ್ಎಸ್ ಕೆ ಶಾಲೆಯು 2002ರಲ್ಲಿ ಆರಂಭವಾಗಿ 2009ರಲ್ಲಿ ಬಂದ್ ಆಗಿದೆ. ಆ ಸಮಯದಲ್ಲಿ ನೀಡಲಾಗಿದ್ದ ಡಿಪಾಜಿಟ್ ಹಣವನ್ನ ಪಡೆಯಲು ಹೋದಾಗ ಮೂರುವರೆ ಸಾವಿರ ರೂಪಾಯಿಯ ಹಣದ ಬೇಡಿಕೆಯಿಟ್ಟಿದ್ದರು.
ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ, ಎಸ್.ಎಸ್.ಬೀಳಗಿ, ಬಾಳನಗೌಡ ತಂಡದಿಂದ ಬಿಇಓ ಬಲೆಗೆ ಬಿದ್ದಿದ್ದಾರೆ.