Posts Slider

Karnataka Voice

Latest Kannada News

ಹೊಲದಲ್ಲಿ ಸಲಿಕೆ ಹಿಡಿದ ಮೇಜರ್ ಸಿದ್ಧಲಿಂಗಯ್ಯ…!

Spread the love

ಧಾರವಾಡ: ಶಿಕ್ಷಣ ಇಲಾಖೆಯ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಅವರು ತಮ್ಮ ಕಾರ್ಯದಿಂದ ಎಲ್ಲರಿಗೂ ಪರಿಚಿತವೇ ಆಗಿದ್ದಾರೆ. ಆದರೆ, ಅವರುಗಳು ಎಷ್ಟೊಂದು ಸರಳ ಎಂಬುದಕ್ಕೆ ಒಂದಿಷ್ಟು ಎಕ್ಸಕ್ಲೂಸಿವ್ ಪೋಟೊಗಳು ಕರ್ನಾಟಕವಾಯ್ಸ್.ಕಾಂಗೆ ಲಭಿಸಿವೆ.

ಶಿಕ್ಷಣ ಇಲಖೆಯ ಆಯುಕ್ತರಾಗಿರುವ ಮೇಜರ್ ಸಿದ್ಧಲಿಂಗಯ್ಯ ಅವರು ತಮ್ಮ ಹೊಲದಲ್ಲಿ ನೀರು ಹೋಗಲು ಸಲಿಕೆ ಹಿಡಿದು ಸ್ವತಃ ತಾವೇ ದಾರಿ ಮಾಡುತ್ತಿದ್ದಾರೆ. ತಮ್ಮದೇ ಜಮೀನಿನಲ್ಲಿ ರೈತನ ಹಾಗೇ ಉಳುಮೆಗೆ, ಬೆಳಗೆ ಅವಶ್ಯವಿರುವ ಕಾರ್ಯವನ್ನ ಮಾಡುತ್ತಿರುವ ಪೋಟೊಗಳು ವೈರಲ್ ಆಗಿವೆ.

ಮೇಜರ್ ಸಿದ್ಧಲಿಂಗಯ್ಯ ಮೊದಲಿಂದಲೂ ಶಿಸ್ತಿನ ಸಿಪಾಯಿ. ಈಗ ಮಾಡುತ್ತಿರುವ ಆಯುಕ್ತರ ಕರ್ತವ್ಯದಲ್ಲೂ ಅಷ್ಟೇ. ಎಲ್ಲ ಕಾಲದಲ್ಲೂ ಶಿಸ್ತನ್ನ ಬಯಸುತ್ತಾರೆ. ಅಷ್ಟೇ ಅಲ್ಲ, ತಾವೂ ಅದನ್ನ ಚಾಚು ತಪ್ಪದೇ ಪಾಲಿಸುತ್ತಾರೆ.

ಸದಾಕಾಲ ಕಾಯಕಯೋಗಿಯಂತೆ ಕಾರ್ಯನಿರ್ವಹಿಸುವ ಮೇಜರ್ ಸಿದ್ಧಲಿಂಗಯ್ಯ, ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗಲೂ ಅದೇ ಶಿಸ್ತಿನಿಂದ ಕೆಲಸ ಮಾಡಿ, ಬೆಳೆಗೆ ನೀರುಣಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *