Posts Slider

Karnataka Voice

Latest Kannada News

ಕಲಘಟಗಿಯ ಆಲದಕಟ್ಟಿಯಲ್ಲಿ ರುದ್ರೇಶ ನೇಣಿಗೆ ಶರಣು…!

Spread the love

ಕಲಘಟಗಿ: ಹೃದಯ ಖಾಯಿಲೆ ಹಾಗೂ ಬೆಳೆ ಮೇಲೆ ತೆಗೆದುಕೊಂಡ ಸಾಲವನ್ನ ತೀರಿಸಲಾಗದೇ ಮನನೊಂದ ರೈತನೋರ್ವ ತನ್ನದೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ರುದ್ರೇಶ ಹುಲಿಯಪ್ಪ ಜಮ್ಮಿಹಾಳ ಎಂಬ 26 ವರ್ಷದ ಯುವಕನಿಗೆ 10 ವರ್ಷದ ಹಿಂದೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದರ ಜೊತೆಗೆ ಮನೆಯಲ್ಲಿ ಹೊಲದ ಮೇಲೆ ಮಾಡಿಕೊಂಡ ಬೆಳೆಸಾಲವನ್ನ ತೀರಿಸಲಾಗದೇ ಮನನೊಂದ ರುದ್ರೇಶ, ದನ ಕಟ್ಟುವ ಮನೆಯಲ್ಲಿನ ಕಟ್ಟಿಗೆಯ ತೊಲೆಗೆ ಹಗ್ಗ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಾನೆ.

ಈ ಕುರಿತು ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸಪೆಕ್ಟರ್ ಪ್ರಭು ಸೂರಿನ್ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *