Posts Slider

Karnataka Voice

Latest Kannada News

ಮದುವೆ ಮಾಡ್ತೇವಿ ಅಂದ್ರು.. ತಬ್ಬಿಕೊಂಡು ನೇಣಿಗೆ ಶರಣಾಗಿದ್ದಾರೆ… ಪ್ರೇಮಿಗಳು..!

1 min read
Spread the love

ಕಲಬುರಗಿ: ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರನ್ನ ಬೇರೆ ಮಾಡುವುದು ಬೇಡವೆಂದುಕೊಂಡಿದ್ದ ಮನೆಯವರು ಮದುವೆ ಮಾಡಿಸುವ ಭರವಸೆಯನ್ನೂ ನೀಡಿದ್ದರು. ಆದರೆ, ಮದುವೆ ಮಾಡುವುದು ತಡವಾಗುತ್ತಿದೆ ಎಂದುಕೊಂಡ ಪ್ರೇಮಿಗಳಿಬ್ಬರು ತಬ್ಬಿಕೊಂಡು ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.

ಪ್ರೇಮಿಗಳ ದಿನದ ಮೂರು ದಿನದ ಮೊದಲೇ ಮನೆಯನ್ನ ತೊರೆದಿದ್ದ ಪ್ರೇಮಿಗಳ ಶವ ಕೊಳೆತ ಸ್ಥಿತಿಯಲ್ಲಿ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದ ಹಳ್ಳದಲ್ಲಿ ಪತ್ತೆಯಾಗಿವೆ. ಇಬ್ಬರ ದೇಹಗಳು ಅಕ್ಕಪಕ್ಕದಲ್ಲಿಯೇ ನೇತಾಡುತ್ತಿವೆ.

ಯಡ್ರಾಮಿ ತಾಲೂಕಿನ ಮಾನಶಿವನಗಿ ಗ್ರಾಮದ  ಪರಶುರಾಮ ಪೂಜಾರಿ ಹಾಗೂ  ಭಾಗ್ಯಶ್ರೀ  ಶವವಾಗಿ ಪತ್ತೆಯಾದ ದುರ್ದೈವಿಗಳಾಗಿದ್ದಾರೆ. ಇಬ್ಬರ ಪ್ರೀತಿಗೆ ಅಡ್ಡಿ ಬರಬಾರದೆಂಬ ಉದ್ದೇಶದಿಂದಲೇ ಮನೆಯವರು ಒಪ್ಪಿದ್ದರು.

ಆದರೆ, ಪ್ರೇಮಿಗಳು ಮದುವೆಯನ್ನ ವಿಳಂಬ ಮಾಡುವ ಮೂಲಕ ತಮ್ಮನ್ನ ಬೇರೆ ಮಾಡುವ ಉದ್ದೇಶವನ್ನ ಹೊಂದಿರಬಹುದೆಂಬ ಶಂಕೆಯಿಂದ ಇಬ್ಬರು ಇಹಲೋಕವನ್ನೇ ತ್ಯಜಿಸಿದ್ದಾರೆ.  ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed