Posts Slider

Karnataka Voice

Latest Kannada News

ಹತ್ಯೆಯಾದವನ ಎದೆಯಲ್ಲಿ ಚೇತನ ಹಿರೇಕೆರೂರು ಟ್ಯಾಟೂ…!

1 min read
Spread the love

ಧಾರವಾಡ: ನಗರದ ಡಿಪೋದ ಸಮೀಪ ಮನೆಯಲ್ಲಿಯೇ ನಡೆದ ಕೊಲೆಯ ಪ್ರಕರಣದಲ್ಲಿ ಹತ್ಯೆಗೀಡಾಗಿರುವ ಯುವಕನ ಎದೆಯ ಮೇಲೆ ಇರುವ ಟ್ಯಾಟುವೊಂದು ಎಲ್ಲರ ಗಮನ ಸೆಳೆದಿದ್ದು, ಅದು ಯಾರ ಟ್ಯಾಟು ಎಂಬುದು ಕರ್ನಾಟಕವಾಯ್ಸ್.ಕಾಂ ಗೆ ಖಚಿತ ಮಾಹಿತಿಯಿಂದ ಲಭ್ಯವಾಗಿದೆ.

ಕುಡಿದ ಮತ್ತಿನಲ್ಲಿ ಮನೆಯಲ್ಲಿನ ಎಲ್ಲರನ್ನೂ ಕಾಡಿಸುತ್ತಿದ್ದ ಆಕಾಶ ಕೋಟೂರ ಎಂಬ ತಂದೆಯಿಲ್ಲದ ಮಗನನ್ನ ಚಿಕ್ಕಪ್ಪನೇ ಕೊಲೆ ಮಾಡಿದ್ದು, ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ, ಹತ್ಯೆಯಾದವನ ಎದೆಯಲ್ಲಿರುವ ಆ ಟ್ಯಾಟು ಯಾರದ್ದು ಎಂಬ ಪ್ರಶ್ನೆ ಹಲವರನ್ನ ಕಾಡುತ್ತಿದೆ.

ಈ ಬಗ್ಗೆ ಮಾಹಿತಿಯನ್ನ ಕಲೆ ಹಾಕಿರುವ ಕರ್ನಾಟಕವಾಯ್ಸ್.ಕಾಂ, ಈ ಟ್ಯಾಟು ಹುಬ್ಬಳ್ಳಿ ಹೊಸೂರಿನ ಚೇತನ ಹಿರೇಕೆರೂರ ಎಂಬವವರದ್ದು. ಬಹುತೇಕ ಯುವಕರ ಪ್ರೀತಿಯ ಅಣ್ಣನಾಗಿರುವ ಚೇತನ, ಹತ್ಯೆಗೀಡಾದ ಆಕಾಶನ ಎದೆಯಲ್ಲಿ ಟ್ಯಾಟುವಾಗಿರುವುದು, ಚೇತನನ ಆತ್ಮೀಯತೆಯ ಒಡನಾಟವನ್ನ ತೋರಿಸುತ್ತದೆ.

ಚೇತನ ಹಿರೇಕೆರೂರು ಮೀಸೆಯನ್ನ ಹಿಡಿದ ಪೋಟೊವನ್ನ ತನ್ನ ಎದೆಯಲ್ಲಿ ಟ್ಯಾಟು ಹಾಕಿಸಿಕೊಂಡಿದ್ದ ಆಕಾಶ ಕೋಟೂರ ಇದೀಗ ಇನ್ನಿಲ್ಲವಾಗಿದ್ದಾನೆ. ಚೇತನ ಹಿರೇಕೆರೂರು ಅವರ ಮನೆಯಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾಲ ಆಕಾಶ ಕೆಲಸ ಮಾಡುತ್ತಿದ್ದನೆಂದು ಗೊತ್ತಾಗಿದೆ. ಉಪನಗರ ಠಾಣೆಯ ಪೊಲೀಸರು ಹತ್ಯೆ ಮಾಡಿದ ಚಿಕ್ಕಪ್ಪ ಪ್ರಕಾಶನನ್ನ ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಿದ್ದಾರೆ.

ಒಂದಿಷ್ಟು ಸಂಬಂಧಗಳು ಹೇಗೋ ಶುರುವಾಗಿ, ಇನ್ನೇಗೋ ಮುಗಿದು ಹೋಗುತ್ತವೆ..


Spread the love

Leave a Reply

Your email address will not be published. Required fields are marked *