ಸ್ವಾಮೀಜಿ ವಿರುದ್ಧ FIR…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಯಾದಗಿರಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಬಂದ ಮಠದ ಭಕ್ತರೋರ್ವರಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣವೊಂದು, ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಲಾಗಿದೆ.

ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಶಾಂತ ಶಿವಯೋಗಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳ ಮೇಲೆ ಜಾತಿ ನಿಂದನೆ, ಜೀವ ಬೇದರಿಕೆ ಕೇಸ್ ದಾಖಲಾಗಿದೆ.
ಹೆಡಗಿಮದ್ರಾ ಗ್ರಾಮದ ಬಸವರಾಜ್ ವಡ್ನಳ್ಳಿ ಎಂಬುವರಿಂದ ಶ್ರೀಗಳ ವಿರುದ್ಧ ಕೇಸ್ ನೀಡಲಾಗಿತ್ರು. ಇದೇ ಮಠಕ್ಕೆ ಗಾಲಿ ಜನಾರ್ದನ ರೆಡ್ಡಿ ಕೂಡಾ ಭಕ್ತರಾಗಿದ್ದಾರೆ.

ಗ್ರಾ.ಪಂ ಅಧ್ಯಕ್ಷ ಚುನಾವಣೆ ಬಳಿಕ ಮಠಕ್ಕೆ ದರ್ಶನ ಹೋಗಿದ್ದ ಬಸವರಾಜ್ ಎಂಬುವವರಿಗೆ ಜಾತಿ ಹೆಸರು ಬಳಸಿ ಬೈದಿದ್ದಾರೆ ಎಂದ ಆರೋಪಿಸಲಾಗಿದೆ.
ಈ ಕುರಿತು ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀಗಳ ಮಠಕ್ಕೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಜನಸಾಮಾನ್ಯರಿಗೆ ಒಂದು ನ್ಯಾಯ ದೊಡ್ಡವರಿಗೊಂದು ನ್ಯಾಯ
