ಸಂತೋಷ ಲಾಡ ಆಪ್ತರನ್ನ ಭೇಟಿಯಾದ ಅಳ್ನಾವರ ಬ್ಲಾಕ್ ಅಧ್ಯಕ್ಷ…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಧಾರವಾಡ: ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲವು ಸಾಧಿಸಿರುವ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಅಳ್ನಾವರ ಬ್ಲಾಕ್ ನ ಯುವ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಚಿವ ಸಂತೋಷ ಲಾಡ ಅವರ ಆಪ್ತರನ್ನ ಭೇಟಿ ಮಾಡಿ ಪಕ್ಷ ಸಂಘಟನೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಮಾಜಿ ಸಚಿವ ಸಂತೋಷ ಲಾಡ ಅವರ ಆಪ್ತರಾಗಿರುವ ಆನಂದ ಕಲಾಲ ಅವರ ಧಾರವಾಡದ ನಿವಾಸಕ್ಕೆ ಆಗಮಿಸಿದ್ದ ಇಮ್ರಾನ ರಾಣೆಬೆನ್ನೂರ, ಯುವ ಕಾಂಗ್ರೆಸ್ ಸಂಘಟನೆಯನ್ನ ಮತ್ತಷ್ಟು ಚುರುಕು ಮಾಡುವ ಬಗ್ಗೆ ಸಮಾಲೋಚನೆ ನಡೆಸಿದರು.
ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಮತ್ತಷ್ಟು ಬೆಳೆಸುವ ಉದ್ದೇಶವನ್ನ ವ್ಯಕ್ತಪಡಿಸಿದ ಇಮ್ರಾನ್ ಅವರಿಗೆ, ಆನಂದ ಕಲಾಲ ಅವರು ಕೂಡಾ ಬೆಂಬಲ ನೀಡುವುದಾಗಿ ಹೇಳಿದರು.
ಇದೇ ಸಮಯದಲ್ಲಿ ಮಾತನಾಡಿದ ಆನಂದ ಕಲಾಲ ಅವರು, ಮಾಜಿ ಸಚಿವ ಸಂತೋಷ ಲಾಡ ಅವರನ್ನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಅದಕ್ಕೆ ಪೂರಕವಾಗಿ ನಾವೆಲ್ಲರೂ ಕೂಡಿಕೊಂಡು ಮುಂದೆ ನಡೆಯೋಣ ಎಂದರು.

