Posts Slider

Karnataka Voice

Latest Kannada News

ಕಲಘಟಗಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ: ಸ್ಥಳದಲ್ಲಿ ತ್ವೇಷಮಯ..!

Spread the love

ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಸರಕಾರಿ ಶಾಲೆಯ ಒಂಬತ್ತನೇಯ ತರಗತಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದ್ದು, ಪಟ್ಟಣದಲ್ಲಿ ಎರಡು ಗಲ್ಲಿಗಳ ಜನರು ಕಾದಾಟಕ್ಕೆ ಇಳಿದ ಪರಿಣಾಮ ಸ್ಥಳದಲ್ಲಿ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ.

ಮಂಜುನಾಥ ವೆಂಕಪ್ಪ ಲಮಾಣಿ ಎಂಬ ವಿದ್ಯಾರ್ಥಿಗೆ ಕೆಲವರು ಚಾಕುವಿನಿಂದ ಬೆನ್ನು ಮತ್ತು ಹೊಟ್ಟೆಗೆ ಇರಿದಿದ್ದು, ವಿದ್ಯಾರ್ಥಿಯನ್ನ ಹುಬ್ಬಳ್ಳಿಯ ಕಿಮ್ಸಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗೆ ವೈದ್ಯರು ಉಪಚಾರ ಮಾಡುತ್ತಿದ್ದು, ಸಧ್ಯ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಕಲಘಟಗಿ ಪರಿಸ್ಥಿತಿ ಹತೋಟಿಯನ್ನ ಕಳೆದುಕೊಂಡಿದ್ದು, ಪೊಲೀಸರು ಜನರನ್ನ ಚದುರಿಸಲು ಪ್ರಯತ್ನ ಪಡುತ್ತಿದ್ದಾರೆ.

ಸಧ್ಯ ಹರಿಜನಕೇರಿ ಮತ್ತು ಲಮಾಣಿ ತಾಂಡಾದ ಗುಂಪುಗಳನ್ನ ಚದುರಿಸಲು ಮುಂದಾಗಿದ್ದು, ಆ ಪ್ರದೇಶದಲ್ಲಿ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *