ನವಲಗುಂದದಲ್ಲೊಂದು “ಪ್ರೀತ್ಸೆ ಪ್ರೀತ್ಸೆ” ಸಿನೇಮಾದ ರಿಯಲ್ ಕಥೆ…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಧಾರವಾಡ: ಆತ ಆಕೆಯನ್ನ ದೂರದಿಂದಲೇ ನೋಡುತ್ತ ಪ್ರೀತಿಸಿತೊಡಗಿದ. ಕೊನೆಗೊಂದು ದಿನ ಕೇಳಿಯೇ ಬಿಟ್ಟ. ಆದರಾಕೆ ಒಲ್ಲೆ ಅಂದಳು. ಅಷ್ಟೇ ಏಕೆ, ಮನೆಯವರಿಗೂ ಸುತಾರಾಂ ಒಪ್ಪಿಗೆ ಇರಲೇ ಇಲ್ಲಾ. ಆದರೆ, ಆ ಒನ್ ಸೈಡ್ ಅಂದಿನಿಂದಲೇ ‘ಪ್ರೀತ್ಸೆ ಪ್ರೀತ್ಸೆ’ ಎಂದು ಕಿರುಕುಳ ಕೊಡಲಾರಂಭಿಸಿದ್ದಾನಂತೆ. ಹಾಗಾಗಿಯೇ ಹುಡುಗಿ ಸಮೇತ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗಿದೆ.
ನವಲಗುಂದ ಪಟ್ಟಣದ ಯುವತಿಯೋರ್ವಳು ಧಾರವಾಡ ಲಕ್ಷ್ಮೀಸಿಂಗನಕೇರಿಯ ನಿವಾಸಿ ನಾಗಲಿಂಗಪ್ಪ ಬಸಪ್ಪ ಭೋವಿ ಎಂಬ ಯುವಕನಿಂದ ರೋಸಿ ಹೋಗಿ, ಧಾರವಾಡದ ಸಾಧನಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ನ್ಯಾಯ ಒದಗಿಸಿಕೊಡುವಂತೆ ಕೇಳಿಕೊಂಡು ಬರುವ ಸ್ಥಿತಿಯನ್ನ ಆ ಪಾಗಲ್ ಪ್ರೇಮಿ ಮಾಡಿದ್ದಾನೆ. ಅಷ್ಟೇ ಅಲ್ಲ, ವಾಟ್ಸಾಫ್ ಸ್ಟೇಟಸ್ ಗಳಲ್ಲಿ ಯುವತಿಯ ಪೋಟೊಗಳನ್ನ ಹರಿಬಿಡುತ್ತಿದ್ದಾನೆ.
ಇದನ್ನೇಲ್ಲ ಸೂಕ್ಷ್ಮವಾಗಿ ಗಮನಿಸಿದ ಸಾಧನಾ ಮಹಿಳಾ ಸಾಂತ್ವನ ಕೇಂದ್ರದ ಡಾ. ಇಸ್ ಬೆಲ್ಲಾ ಝೇವಿಯರ್ ಅವರು, ಧಾರವಾಡ ಜಿಲ್ಲಾ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿ, ಸಮಸ್ಯೆಯನ್ನ ಬಗೆಹರಿಸುವಂತೆ ಕೇಳಿಕೊಂಡಿದ್ದು, ಹುಡುಗಿ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ನಾಗಲಿಂಗಪ್ಪನ ಪ್ರೀತ್ಸೆ ಪ್ರೀತ್ಸೆಯಾಟಕ್ಕೆ ಬ್ರೇಕ್ ಹಾಕಬೇಕೆಂದು ಕೇಳಿಕೊಂಡಿದ್ದರಿಂದ ಇದೀಗ ಒನ್ ಸೈಡ್ ಲವ್ ಸ್ಟೋರಿ ಪೊಲೀಸರಂಗಳಕ್ಕೆ ತಲುಪಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.



