ಹುಬ್ಬಳ್ಳಿ ಬಳಿ ಅನಾಥವಾಗಿದ್ದ ಕಾರಿಗೆ ಮುಕ್ತಿ…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ಪಲ್ಟಿಯಾಗಿದ್ದ ಕಾರೊಂದು ಅನಾಥವಾಗಿ ಬಿದ್ದಿರುವ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ ನಂತರ, ಅದು ನಮ್ಮ ಲಿಮಿಟ್ಸನಲ್ಲಿದೆ ಎಂದು ಪೊಲೀಸರು ಬಂದು ತೆಗೆದುಕೊಂಡು ಹೋದ ಘಟನೆ ನಡೆಯಿತು.
ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಐಸಿಸಿ ಗೋಡೌನ್ ಬಳಿಯಲ್ಲಿ ಕಳೆದ ಮೂರು ದಿನದಿಂದಲೂ ಕಾರೊಂದು ಪಲ್ಟಿಯಾಗಿತ್ತು. ಅದರಲ್ಲಿದ್ದವರು ಯಾರೂ ಎಂಬುದು ಪತ್ತೆಯಿಲ್ಲದ ಹಾಗೇ, ಕಾರನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಆದರೆ, ಈ ಕಾರು ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೇ ಕನ್ ಪ್ಯೂಸ್ ಮಾಡಿಕೊಂಡಿದ್ದ ಮೂರು ಪೊಲೀಸ್ ಠಾಣೆಯವರು ನಮ್ಮಗೇನು ಸಂಬಂಧವಿಲ್ಲವೆಂದು ಸುಮ್ಮನಾಗಿದ್ದರು. ಆದರೀಗ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಅದು ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದುಕೊಂಡು ಕಾರನ್ನ ಬಂಡಿವಾಡ ಓಪಿಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಮೇಲೆ, ಅದರಲ್ಲಿದ್ದವರೂ ಯಾರೂ.? ಏನಾಗಿದ್ದಾರೆ.. ? ಯಾಕೆ ಹೀಗಾಗಿದೆ..? ಎಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕಬೇಕಿದೆ.


