Posts Slider

Karnataka Voice

Latest Kannada News

ಪಕ್ಷಾಂತರಿಗಳೆಲ್ಲಾ ಸಭೆ ಸೇರ್ತಾರಂತೆ: ಸೋತವರಿಗಿಲ್ಲ ಸಚಿವ ಸ್ಥಾನ: ಪಕ್ಷಾಂತರಿಗಳ ಮುಗಿಯದ ಗೋಳು

Spread the love

ಹೊಸಕೋಟೆ:

ಪಕ್ಷ ತೊರೆದು ಕಳೆದ ಚುನಾವಣೆಯಲ್ಲಿ ಗೆದ್ದವರು-ಸೋತವರು ಸೇರಿ‌ ಮುಂದಿನ ನಡೆ ತೀರ್ಮಾನ ಮಾಡ್ತೀವಿ ಎಂದು ಎಂಟಿಬಿ ನಾಗರಾಜ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸದಿಂದ ಮರಳಿದ ನಂತರ ಸೋತವರಿಗೆ ಮಂತ್ರಿ ಸ್ಥಾನವಿಲ್ಲ ಎಂದ ಮೇಲೆ, ಪಕ್ಷಾಂತರಿಗಳಲ್ಲಿ ಮತ್ತಷ್ಟು ಕಸಿವಿಸಿ ಆರಂಭವಾಗಿದೆ. ಸಿಎಂ‌ ಯಾರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂದು ಕಾದು ನೋಡುತ್ತೇವೆ ಎನ್ನುತ್ತಿದ್ದಾರೆ ಎಂಟಿಬಿ.

ಶನಿವಾರ ಎಲ್ಲ 17 ಜನ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಿಗಮ ಮಂಡಳಿ ನೀಡುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಿಎಂ ಏನ್ಮಾಡ್ತಾರೋ ನೋಡ್ತೀವಿ ಎಂದು ಎಂಟಿಬಿ ನಾಗರಾಜ್ ಹೇಳಿದರು.

ಅಧಿಕಾರಕ್ಕಾಗಿ ಪಕ್ಷ ತೊರೆದು ಚುನಾವಣೆಯಲ್ಲಿ ಗೆದ್ದವರ ಮತ್ತು ಸೋತವರ ಕನಸು ಇನ್ನೂ ಕನಸಾಗಿಯೇ ಉಳಿದಿದೆ.


Spread the love

Leave a Reply

Your email address will not be published. Required fields are marked *