Karnataka Voice

Latest Kannada News

ಯಾರ‌್ದೋ ದುಡ್ಡಿಗೆ ಗೌರಿ ಬೆಟಾಲಿಯನ್ ಪ್ರಚಾರ: ಶೆಟ್ಟರ ಗರಂ- ಜಿಲ್ಲಾಡಳಿತದಿಂದ ಕಾನೂನು ಕ್ರಮ

ಧಾರವಾಡ: ರಾಜ್ಯ ಸರಕಾರ ಕೊಡಮಾಡುವ ಆಯುಷ್ ಇಲಾಖೆಯ ಕಿಟ್‌ಗಳನ್ನ ಸರಕಾರದ ಪ್ರತಿನಿಧಿಗಳು ಅಥವಾ ಅಧಿಕಾರಿಗಳು ಕೊಡುವುದು ನಿಯಮ. ಆದರೆ, ಕಾಂಗ್ರೆಸ್‌ನವರು ಅದನ್ನೇ ತಮ್ಮ ಜಾಹೀರಾತು ಮಾಡಿಕೊಂಡು ತಿರುಗುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿಂದು ಸಭೆ ನಡೆಸಿದ ಸಮಯದಲ್ಲಿ ಕಾಂಗ್ರೆಸ್‌ನ ಕೆಲವರು ಆಯುಷ್ಯ ಇಲಾಖೆಯ ಬಗ್ಗೆ ಜಾಹೀರಾತು ಹಾಕಿಕೊಂಡು ಅಲೆದಾಡುತ್ತಿದ್ದಾರೆ. ಈ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಅವರಿಗೆ ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿದ್ದು, ಈ ಬಗ್ಗೆ ಅವರೇ ಕಾನೂನು ಕ್ರಮ ಜರುಗಿಸುತ್ತಾರೆಂದು ಶೆಟ್ಟರ ಹೇಳಿದರು.


ಕೊರೋನಾ ಸಮಯದಲ್ಲಿ ಸರಕಾರದ ಯೋಜನೆಗಳನ್ನು ಪ್ರಚಾರಕ್ಕೆ ಬಳಕೆ ಮಾಡಿ ಈಗಾಗಲೇ ಕೆಲವು ಜಾಹೀರಾತು ಬಂದಿರುವುದು ಮತ್ತೂ ಪ್ರಚಾರದ ಕರಪತ್ರಗಳನ್ನು ಹಂಚಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಶಾಸಕ ಅಮೃತ ದೇಸಾಯಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *