Posts Slider

Karnataka Voice

Latest Kannada News

ಶಿಕ್ಷಕರೇ ಹುಷಾರ್: ಶಾಲೆ-ಆವರಣದಲ್ಲಿ ಹೆಜ್ಜೆ ಇಟ್ಟರೇ ಶಿಸ್ತು ಕ್ರಮ: ದಾರಿ ತಪ್ಪುತ್ತಿದೇಯಾ ಶಿಕ್ಷಣ ಇಲಾಖೆ..?

Spread the love

ಹಾಸನ: ವಿದ್ಯಾಗಮ ಯೋಜನೆಯ ಬಗ್ಗೆ ಖಾಸಗಿ ಶಾಲೆಯ ಸಂಘದ ದೂರು ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಚ್ಚರಿಯ ಆದೇಶವನ್ನ ಹೊರಡಿಸಿದ್ದು, ಶಾಲೆಯ ಒಳಗೆ ಹಾಗೂ ಶಾಲೆಯ ಆವರಣದೊಳಗೆ ಹೋದ್ರೇ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಇಂದು ಹಾಸನ ಜಿಲ್ಲೆಯ ಅಧಿಕಾರಿಗಳು ಆದೇಶವನ್ನ ಹೊರ ಹಾಕಿದ್ದು, ವಿದ್ಯಾಗಮ ಯೋಜನೆಯ ಕಾರ್ಯಕ್ರಮದಡಿ ಶಾಲೆಯ ಒಳಗೆ ಮತ್ತು ಆವರಣದಲ್ಲಿ ಕಾರ್ಯಕ್ರಮ ನಡೆಸುವುದು ರಾಷ್ಟ್ರೀಯ ವಿಪತ್ತುಕಾಯಿದೆ ಉಲ್ಲಂಘಟನೆ ಆಗುತ್ತದೆಯಂತೆ.

ಈ ಕಾರಣದಿಂದ ಶಿಕ್ಷಕರು ಬೀದಿಯಲ್ಲಿ ನಿಂತು, ಧಾರ್ಮಿಕ ಸ್ಥಳಗಳಲ್ಲಿ ನಿಂತು ಅಥವಾ ಮರದ ನೆರಳಿನಲ್ಲಿ ನಿಂತು ಪಾಠ ಮಾಡಬೇಕೆಂದು ಕೂಡಾ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.

ಆವರಣದಲ್ಲಿಯೂ ಶಾಲೆಯೊಳಗಡೆಯೂ ಹೋದರೇ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ಮೇಲೂ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಇಸಿಓ, ಬಿಆರ್ ಪಿ, ಸಿಆರ್ ಪಿ ಯವರು ಸುತ್ತೋಲೆಯನ್ನ ಪಾಲಿಸುವಂತೆಯೂ ತಿಳಿಸಿದ್ದಾರೆ.

ವಿದ್ಯಾಗಮ ದೂರು ಬಂದಿರುವುದು ಏಕೆ ಎಂಬುದನ್ನೂ ಸರಿಯಾಗಿ ತಿಳಿದುಕೊಳ್ಳುವ ಗೋಜಿಗೆ ಡಿಡಿಪಿಐ ಹೋಗಿಲ್ಲವೆನ್ನಿಸುವ ರೀತಿಯಲ್ಲಿ ಸುತ್ತೋಲೆಯನ್ನ ಹೊರಡಿಸಲಾಗಿದೆ. ಶಿಕ್ಷಕರು ಆವರಣದಲ್ಲೂ ಹೋಗಬಾರದೆಂದರೇ ಏನರ್ಥ ಸಾರ್..?


Spread the love

Leave a Reply

Your email address will not be published. Required fields are marked *