Posts Slider

Karnataka Voice

Latest Kannada News

ಹಳೇ ಬಿಜೆಪಿಗರಲ್ಲಿ ಮತ್ತೆ ಸೋತವರಿಗೆ ಮಂತ್ರಿ ಸ್ಥಾನ: ಪಕ್ಷಾಂತರಿಗಳನ್ನ ಬಿಟ್ರೇ ತ್ರಿಮೂರ್ತಿಗಳಿಗೆ ಮಣೆ

Spread the love

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಎಂಬ ಹೈಡ್ರಾಮಾ ಕೊನೆಗೂ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ಆದ್ರೇ, ಬಿಜೆಪಿ ಮತ್ತೆ ಸೋತ ವ್ಯಕ್ತಿಗೆ ಮಂತ್ರಿ ಮಾಡಲು ಹೊರಟಿದೆ. ಹೀಗಾಗಿ, ಬಿಜೆಪಿಯಲ್ಲೀಗ ರಗಳೆ ಆರಂಭವಾಗಲಿದೆ.

ಪಕ್ಷಾಂತರಿಗಳಲ್ಲಿ ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿ ಹೊರತು ಪಡಿಸಿ ಇನ್ನುಳಿದವರಿಗೆ ಸಚಿವ ಸ್ಥಾನ ದೊರಕಲಿದೆ. ಹಳೆಯ ಬಿಜೆಪಿಗರಲ್ಲಿ ಕೇವಲ ಮೂರೇ ಮೂರು ಜನರನ್ನ ಮಂತ್ರಿ ಮಾಡಲಿದ್ದಾರೆ ಸಿಎಂ ಯಡಿಯೂರಪ್ಪ.

ಸಿ.ಪಿ.ಯೋಗೇಶ್ವರ, ಅರವಿಂದ ಲಿಂಬಾವಳಿ ಹಾಗೂ ಉಮೇಶ ಕತ್ತಿ ಮಂತ್ರಿಯಾಗಲಿದ್ದಾರೆ. ಈ ಮೂಲಕ ಬೆಳಗಾವಿ ಜಿಲ್ಲೆಗೆ ಮತ್ತೆರಡು ಮಂತ್ರಿ ಸ್ಥಾನ ದೊರಕಿದಂತಾಗತ್ತೆ. ಅಷ್ಟೇ ಅಲ್ಲ, ನಾಲ್ಕು ಸಚಿವರು ಇದೊಂದೆ ಜಿಲ್ಲೆಗೆ ದೊರಕಿದಂತಾಗತ್ತೆ.

ಅಧಿಕಾರಕ್ಕಾಗಿ ಹೀಗೇಲ್ಲಾ ನಡೆಯೋದು ಸಹಜ ಅಂತಾರೆ ಪ್ರಜ್ಞಾವಂತರು…


Spread the love

Leave a Reply

Your email address will not be published. Required fields are marked *