ಬಿಜೆಪಿಯಲ್ಲಿ ಯುವಕರಿಗೆ ಟಿಕೆಟ್

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವೇರುವ ಮುನ್ನವೇ ಬಿಜೆಪಿಯಲ್ಲಿನ ಯುವಕರ ಗುಂಪು ಉಲ್ಲಾಸದಿಂದ ತೇಲಾಡುತ್ತಿದೆ. ಇದಕ್ಕೆ ಕಾರಣ ಏನಿರಬಹುದೆಂಬ ಲೆಕ್ಕಾಚಾರ ನಿಮ್ಮಲ್ಲಿ ಮೂಡಿದ್ದರೇ ಅದನ್ನ ಇಲ್ಲಿ ಹೇಳ್ತಿವಿ ನೋಡಿ. ಭಾರತೀಯ ಜನತಾ ಪಕ್ಷ ಮುಂಬರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬರೋಬ್ಬರಿ 30 ಯುವಕರಿಗೆ ಟಕೆಟ್ ಕೊಡಲು ಮುಂದಾಗಿದೆ. ಪಕ್ಷವನ್ನು ಬೆಳೆಸುವ ಜೊತೆಗೆ ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಪಕ್ಷ ಹೊಂದಿದೆ. ಇದೇ ಕಾರಣಕ್ಕೆ ಅವಳಿನಗರದ ಬಿಜೆಪಿ ಯುವ ನಾಯಕರು ಹೊಸ ಕನಸನ್ನು ಕಾಣತೊಡಗಿದ್ದಾರೆ. ಭಾರತೀಯ ಜನತಾ ಪಕ್ಷ ಇಂತಹ ನಿರ್ಣಯವನ್ನು ಒಮ್ಮತದಿಂದ ತೆಗೆದುಕೊಂಡಿದ್ದು. ಇನ್ನುಳಿದ ಪಕ್ಷದಲ್ಲಿ ನಡುಕ ಹುಟ್ಟಿಸಿದೆ.