ಡ್ಯೂಟಿಗೆ ಬಂದು ಯೂನಿಫಾರ್ಮ್ನಲ್ಲೇ “ಹೆಡ್ಕಾನ್ಸಟೇಬಲ್” ನೇಣಿಗೆ ಶರಣು…
1 min read
ಮಡದಿಯ ನೆನಪಿನಲ್ಲಿ ಮನಸ್ಸು ಮುರಿದುಕೊಂಡಿದ್ದ ಪೇದೆ
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಾವು
ಶಿವಮೊಗ್ಗ: ಜೊತೆಗಾರತಿ ಮಡದಿ ಜೀವನದುದ್ದಕ್ಕೂ ಇರುವಳೆಂಬ ನಂಬಿಕೆಯಲ್ಲಿ ಬದುಕಿದ್ದ ಪೊಲೀಸ್ರೋರ್ವರು, ಪತ್ನಿಯ ಸಾವನ್ನ ಮನಸ್ಸಿಗೆ ಹಚ್ಚಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆ ಜಯಪ್ಪ ಉಪ್ಪಾರ್ ಎಂಬುವವರೇ ಪ್ರಾಣ ಕಳೆದುಕೊಂಡ ದುರ್ಧೈವಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇವರ ಪತ್ನಿ ಆರೋಗ್ಯ ಸರಿಯಿಲ್ಲದ ಪ್ರಯುಕ್ತ ಮರಣ ಹೊಂದಿದ್ದರು.
ಮಡದಿಯ ಸಾವಿನ ದುಃಖದಿಂದ ನೊಂದು ಜಯಪ್ಪ ಉಪ್ಪಾರ್ ಮರಣ ಹೊಂದಿದ್ದಾರೆಂದು ತಿಳಿದು ಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.